Posts

Showing posts from January, 2020

ಹೆಚ್ಚು ಆದಾಯ ಹೊಂದಿರೋ ದೇವಸ್ಥಾನಗಳ ಪಟ್ಟಿ

ಹೆಚ್ಚು ಆದಾಯ ಹೊಂದಿರೋ ದೇವಸ್ಥಾನಗಳ ಪಟ್ಟಿ ಬಿಡುಗಡೆ: ಮೊದಲ ಸ್ಥಾನ ಕಾಯ್ದುಕೊಂಡ ಕುಕ್ಕೆ ಸುಬ್ರಹ್ಮಣ್ಯ! ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವಂತಹ ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ಹೊಂದಿರುವ ದೇವಾಲಯಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಪ್ರಮುಖ 10 ದೇವಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಬಾರಿಯು ಕೂಡ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ವಾರ್ಷಿಕ ಅಂದಾಜು 100 ಕೋಟಿ ರೂ. ಆದಾಯದೊಂದಿಗೆ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ.  ಉಡುಪಿಯ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ 2ನೇಸ್ಥಾನ ಕಟೀಲು ದುರ್ಗಾಪರಮೇಶ್ವರಿ 3ನೇ ಸ್ಥಾನ  ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ 4ನೇ ಸ್ಥಾನ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ 5ನೇ ಸ್ಥಾನ ಬೆಳಗಾವಿಯ ಸವದತ್ತಿ ಯಲ್ಲಮ್ಮ ದೇವಸ್ಥಾನ 6ನೇ ಸ್ಥಾನ ಶ್ರೀ ಮಂದಾರ್ತಿ ದೇವಸ್ಥಾನ 7ನೇ ಸ್ಥಾನ ಪಡೆದುಕೊಂಡಿದೆ. ಕೊಪ್ಪಳದ ಗುಳ್ಳಗಮ್ಮನ ದೇವಸ್ಥಾನ, ಬೆಂಗಳೂರಿನ ಬನಶಂಕರಿ ದೇವಸ್ಥಾನ ಮತ್ತು ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ 8 ರಿಂದ 10 ಕೋಟಿ ರೂ. ಆದಾಯದೊಂದಿಗೆ ಕೊನೆಯ ಮೂರು ಸ್ಥಾನವನ್ನು ಪಡೆದುಕೊಂಡಿದೆ

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು ಪ್ರಧಾನಮಂತ್ರಿ ಜನ್ ಧನ್ ಯೋಜನೆ ಯಾವಗಾ ಜಾರಿಗೆ ಬಂತು? 2014 ಆಗಸ್ಟ್ ೨೮ ಸ್ವಚ್ಛ ಭಾರತ ಯೋಜನೆ ಯಾವಾಗ ಜಾರಿಗೆ ಬಂದಿತು? ೨೦೧೪ ಅಕ್ಟೋಬರ್ ೨ ಪಂಡಿತ ದೀನದಯಾಳ ಉಪಾಧ್ಯಾಯ ಶ್ರಮಮೆವ ಜಯತೆ ಕಾರ್ಯಕ್ರಮ ಯಾವಗ ಜಾರಿಗೆ ಬಂದಿತು? ೨೦೧೪ ಅಕ್ಟೋಬರ್ ೧೬ ಮುದ್ರಾ ಬ್ಯಾಂಕ್ ಯೋಜನೆ ಯಾವಾಗ ಜಾರಿಗೆ ಬಂದಿತು ೨೦೧೫ ಎಪ್ರಿಲ್ ೦೮ ಭೇಟಿ ಬಚಾವೊ ಭೇಟಿ ಪಡಾವೊ ಯೋಜನೆ ಯಾವಾಗ ಜಾರಿಗೆ ಬಂದಿತು  ೨೦೧೪ ಜನೆವರಿ ೨೨ ಸುಕನ್ಯಾ ಸಮೃದ್ಧಿ ಯೋಜನೆ ಯಾವಾಗ ಜಾರಿಗೆ ಬಂದಿತು? ೨೦೧೫ ಜನವರಿ ೨೨ ಸ್ಮಾರ್ಟ್ ಸಿಟಿ ಯೋಜನೆ ಯಾವಾಗ ಜಾರಿಗೆ ಬಂದಿತು? ೨೦೧೫ ಎಪ್ರಿಲ್ ೩೦ ನವಾಮಿ ಗಂಗೆ ಯೋಜನೆ ಯಾವಾಗ ಜಾರಿಗೆ ಬಂದಿತು? ೨೦೧೬ ಜುಲೈ ೦೮ ಸ್ಟಾರ್ಟ್ ಅಪ್ ಇಂಡಿಯಾ ಯೋಜನೆ ಯಾವಾಗ ಜಾರಿಗೆ ಬಂದಿತು? ೨೦೧೬ ಜನವರಿ ೧೬ ಸ್ಕಿಲ್ ಇಂಡಿಯಾ ಯೋಜನೆ ಯಾವಾಗ ಜಾರಿಗೆ ಬಂದಿತು? ೨೦೧೫ ಜುಲೈ ೧೫

55ನೇ 'ಜ್ಞಾನಪೀಠ ಪ್ರಶಸ್ತಿ

55ನೇ 'ಜ್ಞಾನಪೀಠ ಪ್ರಶಸ್ತಿ ಮಲಯಾಳಂ ಹಿರಿಯ ಕವಿ 'ಅಕ್ಕಿತಂ ಅಚ್ಯುತ್ತನ್'ಗೆ ಒಲಿದ ಸಾಹಿತ್ಯ ಮುಕುಟ 55ನೇ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇದೀಗ ಬಿಡುಗಡೆಯಾಗಿದೆ. 55ನೇ ಜ್ಞಾನಪೀಠ ಪ್ರಶಸ್ತಿಯನ್ನು ಇದೀಗ ಮಲೆಯಾಳಂನ ಹಿರಿಯ ಸಾಹಿತಿ 93 ವರ್ಷದ ಅಕ್ಕೀತಂ, ಅವರು ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿನ ಸೇವೆಗಾಗಿ ಭಾರತದಲ್ಲಿ ನೀಡಲಾಗುವ ಅತ್ಯಂತ ಪರಮೋಚ್ಛ ಪ್ರಶಸ್ತಿ ಅಂದ್ರೇ ಅದು, ಜ್ಞಾನಪೀಠ ಪ್ರಶಸ್ತಿಯಾಗಿದೆ. ಇಂತಹ 55ನೇ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಬಾರಿ ಕೇರಳ ಸಾಹಿತ್ಯಕ್ಕೆ ಹೊಸಗಾಳಿ ತಂದುಕೊಟ್ಟಂತ ಅಕ್ಕೀತಂ ಅವರಿಗೆ ಸಂದಿದೆ. ಮಲೆಯಾಳಂ ಭಾಷೆಯ ಹಿರಿಯ ಕವಿ ಎನಿಸಿರುವ ಅಕ್ಕೀತಂ ಅಚ್ಯುತ್ತನ್ ನಂಬೂದಿರಿಯವರಿಗೆ 93 ವರ್ಷ. ಕೇರಳದ ಪಲಕ್ಕಾಡ್ ನಲ್ಲಿ ಜನಿಸಿದ ಇವರು, ಮಲೆಯಾಳಂ ಭಾಷೆಯಲ್ಲಿ ಕವನ, ನಾಟಕ, ಸಣ್ಣಕತೆಗಳ ಸಾಹಿತ್ಯ ಸೇವೆಯನ್ನು ಸಲ್ಲಿಸಿದ್ದಾರೆ. ಇಂತಹ ಸಾಹಿತ್ಯ ಕೃಷಿಕರಿಗೆ ಇದೀಗ ದೇಶದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ಸಂದಿದೆ. ಈ ಮೊದಲು ಪದ್ಮಶ್ರೀ, ಅಖಿಲ ಕೇರಳ ಇಜುತಚಂ ಸಮಾಜಂ ಪ್ರಶಸ್ತಿ ಸೇರಿದಂತೆ ಇತರೆ ಅನೇಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.